“ಭಯ... ಭಯ... ಓಹ್! ಬೆಳಕು, ಬೆಳಕು... ದಯಮಾಡಿ ಬಾಗಿಲು ಮುಚ್ಚಿರಿ. ನಾನು ಕಂಡು ಬಿಟ್ಟರೆ? ಅಯ್ಯೋ! ಎಂಥಾ ದರಿದ್ರ ರೂಪವಿದು. ಜನ ಉಗಿದಾರು, ಹೊಡೆದಾರು, ನನ್ನ ಹರಿದು ನಾಲ್ಕಾರು ಕಡೆ ಎಸೆದಾರು. ನನ್ನ ನೋಡಿದೊಂದಿಬ್ಬರು ನನ್ನೀ ವೇಷದ ಬಗೆಗಿನ ಸತ್ಯವನ್ನು ಮುಚ್ಚಿಟ್ಟರು! ನನ್ನೆಡೆಗಿನ ಮರುಕವೇ? ಅಲ್ಲ.. ಅಲ್ಲ.. ನನ್ನ ಹುಟ್ಟಿಸಿದಾತನೊಟ್ಟಿಗಿನ ವಿಶ್ವಾಸವೇ? ಅಯ್ಯೋ.. ಆತ ಕುರುಡಾಗಿ ಹೋಗಿದ್ದಾನೆ! ಹೀಗೆಯೇ.. ಹೀಗೆಯೇ.. ನನ್ನ ಹಾಗೆಯೇ ವಿಕಾರ, ಕುರೂಪ, ಅಸಹ್ಯಕರ ಜೀವಿಗಳನ್ನ ಹುಟ್ಟಿಸಿ ಜಗತ್ತಿಗೆಲ್ಲಾ ತೋರಿಸಿಬೇಕೆಂದಿದ್ದಾನೆ! ಅಯ್ಯೋ.. ಅಯ್ಯೋ.. ನೀವಾದರೂ ಹೇಳಬಾರದೆ? ಆತನಿಗೇನೂ ಕಾಣಲಾರದು... ದಯಮಾಡಿ ಎಲ್ಲಾ ತಿಳಿದ ನೀವು ಹೀಗೆ ನಮ್ಮ ಮೇಲೆ ಬೆಳಕ್ಹಾಯಿಸಬೇಡಿ.. ನಾವು ಕಂಡುಬಿಟ್ಟರೆ? ಅಯ್ಯೋ.. ಬೆಳಕು, ಭಯ ಭಯ...”ನನ್ನ ಲೇಖನಗಳ ಈ ಆರ್ತನಾದ ದಿನಾ ರಾತ್ರಿಯ ಕನಸಿನಲ್ಲಿ ಕೇಳಿಸುತ್ತಿದೆಯಲ್ಲಾ?
No comments:
Post a Comment