Monday, October 28, 2024

ತೃಷ್ಣೆ!

'ಮಹಾಂಮತ್ರಿಗಳೆ, ನಮ್ಮೆಲ್ಲಾ ಮಂತ್ರಿ ಮಹಾಶಯರ ಸಭೆಯೊಂದನ್ನೇರ್ಪಡಿಸಬೇಕಲ್ಲ' ಜಕೋಬನ ಕೋರಿಕಾ ರೂಪಕ ಆದೇಶಕ್ಕೆ ಮಹಾಮಂತ್ರಿ ತಲೆದೂಗಿದರು. 

ಮಂತ್ರಿಯ ಕುತೂಹಲವನ್ನರಿತ ಜಕೋಬನೇ ಉಲಿದ 
'ಇತ್ತೀಚೆಗೆ ಜನರ ಕಷ್ಟ ನಿವೇದನೆಗಳು ಹೆಚ್ಚಿವೆ. ಈ ಸಂಬಂಧ ಪರಿಹಾರ ಚಿಂತನೆ ನಡೆಸಬೇಕಿದ್ದು, ಈ ಸಭೆ....'

'ಚಿತ್ತ ಮಹಾಪ್ರಭು..' 

ಮತ್ತೂ ಮಂತ್ರಿಯ ಮುಖಚರ್ಯೆಯಿಂದ ಆತನ ಅಸಂತೃಪ್ತಿಯನ್ನರಿತ ಜಕೋಬ ಮುಂದುವರೆಸಿದ. 

Friday, October 11, 2024

ಕೋಚಪ್ಪನ ದಿನಗಳು

ಮಂತ್ರಿವರ್ಯರೇ, ಕೆಲಸ ಹೇಗೆ ಸಾಗಿದೆ' ವಿರಾಮದ ಸಮಯದಲ್ಲಿ ಜಕೋಬ ಮಹಾರಾಜ ಲೋಕಾಭಿರಾಮವಾಗಿ ಕೇಳಿದ. 

'ಮಹಾಪ್ರಭುಗಳೆ! ತಮ್ಮ ಪ್ರೋತ್ಸಾಹದಿಂದ ನಾವು ಯೋಜಿಸಿದ್ದ ಯೋಜನೆ ಅತ್ಯಂತ ಯಶಸ್ವಿಯಾಗಿ, ಜನರನ್ನ ಕಾರ್ಯನಿರತರನ್ನಾಗಿ ಮಾಡಿವೆ' 

'ಭಲೇ ಭಲೇ'

ತನ್ನ ರಾಜ್ಯದ ಜನ ಎಂದಿಗೂ ಕಾರ್ಯನಿರತವಾಗಿರಬೇಕೆಂದು, ಕೆಲಸ ಇಲ್ಲದೋರಿಗೆಲ್ಲಾ ಜಕೋಬ ಒಂದು ಕೆಲಸವನ್ನ ಸೃಷ್ಟಿಸಿದ್ದ - ತಾವು ಬೇಡಿಕೆ ಇಟ್ಟಷ್ಟೂ ಬೆಳೆಯನ್ನ ಬೆಳೆದು ಕೊಡೋದು. ಜನ ಬೆಳೆ ನೀಡದೇ ಹೋದರೂ, ಬೆಳೆಯನ್ನ ಬೆಳೆಯುವ ಕೆಲಸದಲ್ಲಿ ತೊಡಗಿಸಿಕೊಂಡರೆ ಸಾಕಲ್ಲವೇ! ಅದೇ ಜಕೋಬನ ಧ್ಯೇಯವಾಗಿತ್ತು. ಬೇಳೆ ನೀಡದೆ ಹೋದವರ ಬಗ್ಗೆ ರಾಜರು ತಲೆ ಕೆಡೆಸಿಕೊಳ್ಳದೇ ಹೋದರೆ, ಮತ್ತೆ ಬೆಳೆ ಬೆಳೆದಾರೆ? ಹಾಂ! ಅದ್ಕಾಗಿಯೇ ಚೆನ್ನಾಗಿ ಬೆಳೆ ಬೆಳೆದೋರಿಗೆ ಚೆನ್ನಾಗಿಯೇ ಪ್ರತಿಫಲ ನೀಡೋದು. 

ಅನರ್ಥ

ಗು: ನಮ್ಮ ಜೀವನದ ಪರಮೋಚ್ಛ ಧ್ಯೇಯ ಪಿನಾಕ್ಲಿಯನ್ನ ತಲುಪೋದು. ಅದು ಅಷ್ಟು ಸುಲಭವಾಗಿ ಲಭಿಸೋದಲ್ಲ. ಪಿನಾಕ್ಲಿ ನಮ್ಮ ಪ್ರತಿಯೊಂದು ನಡೆಯನ್ನು ಗಮನಿಸ್ತಾ ಇರ್ತಾನೆ. ನಮ್ಮ ಪಾಪ ಪುಣ್ಯಗಳನ್ನ ಲೆಕ್ಕ ಹಾಕ್ತಾ ಇರ್ತಾನೆ. 

ಶಿ: ಪಿನಾಕ್ಲಿ ಯಾರು? 

ಗು: ಅಧೋನಿರ್ನಾಮಿತ, ಉದ್ರಚ್ಛಕ್ತ, ನಭೋಭುಮ್ಯಾಂತರ, ಮರ್ಕದಗಂತಿಕ, ಪಿಪ್ರಚ್ಛಾಕ್ತ ಶಕ್ತಿ. 

ಶಿ: ಹಾಂ..............