'ಮಹಾಂಮತ್ರಿಗಳೆ, ನಮ್ಮೆಲ್ಲಾ ಮಂತ್ರಿ ಮಹಾಶಯರ ಸಭೆಯೊಂದನ್ನೇರ್ಪಡಿಸಬೇಕಲ್ಲ' ಜಕೋಬನ ಕೋರಿಕಾ ರೂಪಕ ಆದೇಶಕ್ಕೆ ಮಹಾಮಂತ್ರಿ ತಲೆದೂಗಿದರು.
ಮಂತ್ರಿಯ ಕುತೂಹಲವನ್ನರಿತ ಜಕೋಬನೇ ಉಲಿದ
'ಇತ್ತೀಚೆಗೆ ಜನರ ಕಷ್ಟ ನಿವೇದನೆಗಳು ಹೆಚ್ಚಿವೆ. ಈ ಸಂಬಂಧ ಪರಿಹಾರ ಚಿಂತನೆ ನಡೆಸಬೇಕಿದ್ದು, ಈ ಸಭೆ....'
'ಚಿತ್ತ ಮಹಾಪ್ರಭು..'
ಮತ್ತೂ ಮಂತ್ರಿಯ ಮುಖಚರ್ಯೆಯಿಂದ ಆತನ ಅಸಂತೃಪ್ತಿಯನ್ನರಿತ ಜಕೋಬ ಮುಂದುವರೆಸಿದ.