Saturday, November 30, 2024

ಕಣ್ ಕಟ್

ಖಜಾಂಚಿಗಳೇ ಬಾಗಿಲು ತಟ್ಟುತ್ತಿದ್ದದ್ದು. ಸುಂದರ ಸ್ವಪ್ನವೊಂದಕ್ಕುಂಟಾದ ಭಂಗದಿಂದ ಜಕೋಬನಿಗೆ ಸಿಟ್ಟಾಯಿತಾದರೂ, ವಿಷಯ ಗಂಭೀರವೆಂದು ಹೇಳಿದರಿಂದ ಸುಮ್ಮನಿದ್ದ.


'ಮಹಾರಾಜರೇ! ಲೆಕ್ಕ ಪರಿಶೋಧನೆ ಈಗಷ್ಟೇ ಮುಗಿದಿದ್ದು, ತಮ್ಮ ನಿದ್ರಾಭಂಗ ಅನಿವಾರ್ಯವಾಯಿತು. ರಾಜ್ಯದ ಬೊಕ್ಕಸ ಬರಿದಾಗಲಿದೆ. ಸಾಲಕ್ಕೇ ಎಲ್ಲವನ್ನೂ ‌ವ್ಯಯಿಸಿದರೆ, ತಮಗೇ ಕಿತ್ತು ತಿನ್ನುವ ಸ್ಥಿತಿ ಎದುರಾಗಲಿದೆ' 

Sunday, November 17, 2024

ಮುಸುಕು

ಹಾಸಿಗೆ ಮೇಲೆ ಉಸಿರಾಡುತ್ತಲೇ ಹಾಗೆಯೇ ಕಣ್ಣು ನಾಲಿಗೆ ಹೊರ ಬಿಟ್ಟು ಮಲಗಿದ್ದ. ಬದುಕಿದ್ದಾಗಲೇ ಸುಡುವುದು ಅಮಾನವೀಯವೆಂದು ಸುತ್ತ ಕೆಲವರು ಸಾವಿಗಾಗಿ ಎದುರು ನೋಡ್ತಿದ್ದರು. ಸಾಕಷ್ಟು ಜನ, ಮತ್ತೆ ಮೊದಲಿನಂತೆ ಆತ ಎದ್ದು ಕೂರುವನೇ ಎಂದು ನೋಡುತ್ತಿದ್ದರು. ಆದರೆ ಸಾವು ಕೆಳಗೂ ಇಳಿಯದೇ, ಹೊರಗೂ ಹೊರಳದೇ ಗಂಟಲಲ್ಲೇ ಕೂತು ಇವನನ್ನ ಕೇಳಿತು - 'ಈಗ ಹೇಳು. ಹೇಳುವವರೆಗೂ ಈ ಜಾಗ ಬಿಟ್ಟು ಕದಲಲಾಗದು.‌ ನನಗಿದೋ ಆದ ಆಜ್ಞೆ'.

Tuesday, November 5, 2024

ಮೌನದ ಮಾತು - 12

ತುಟಿಯ ಮೇಲೆ ತುಂಟ ಕಿರುನಗೆ 

ಮೈಯೆಲ್ಲಾ ಕೆಂಪ ಕೆಂಪಗೆ 




Friday, November 1, 2024

ವ್ಯವಸ್ಥಿತ ಅವ್ಯವಸ್ಥೆ!

ಒಮ್ಮೊಮ್ಮೆ ರಕ್ತ ಕುದಿಯುತ್ತದೆ - ಇನ್ನೂ ಯುವಕನಾದ್ದರಿಂದ. ಆದರೂ ತನಗ್ಯಾಕೆ ಎನ್ನುವ ಪ್ರಶ್ನೆಯಿಂದ, ಇದು ತನಗೆ ಸಂಬಂಧ ಪಟ್ಟದ್ದಲ್ಲವೆನ್ನುವ ಹಿಂಜರಿಕೆಯಿಂದ, ಮುಂದೇನಾದರೂ ಆಗಿಬಿಟ್ಟರೆ ಎನ್ನುವ ಭಯದಿಂದ ಸುಮ್ಮನಿರಲೇಬೇಕಾದ ಭ್ರಮಾನಿವಾರ್ಯತೆಯ ಸೃಷ್ಟಿಯಾಗಿದೆ.‌ ಸಾರ್ವಜನಿಕ  ಶಿಕ್ಷಣ ವ್ಯವಸ್ಥೆಯಲ್ಲಿ ಮೈಗಳ್ಳರು, ಕಾಕರು, ಗೂಂಡಾಗಳು, ರಿಯಲ್ ಎಸ್ಟೇಟ್ ಬಿಸಿನಸ್ಮೆನ್ ಗಳು, ದಲ್ಲಾಳಿಗಳು, ಚೀಟಿ ವ್ಯಾಪಾರಿಗಳು ಹೀಗೇ ಹಣದ ರಾಶಿಯಲ್ಲೇ‌ ಗೋರಿ ಕಟ್ಟಿಸಿಕೊಳ್ಳಬೇಕೆಂದು ಹಟಕ್ಕೆ ಬಿದ್ದು ಹೋದ ಜನರೇ ತುಂಹೋಗಿರೋದು ಎಂಥಾ ವಿಪರ್ಯಾಸವಲ್ಲವೇ? ಅಸಲಿಗೆ ಉನ್ನತ ಶಿಕ್ಷಣದ ಶಿಕ್ಷಕನಿಗೆ (ಸೋ ಕಾಲ್ಡ್ ಪ್ರೊಫೆಸರ್) ಇರೋ ಸಂಬಳ ಒಬ್ಬ ಐ.ಎ.ಸ್ ಅಧಿಕಾರಿಗೂ ಇರದಿರೋದರಿಂದಲೇ ಈ ಶಿಕ್ಷಕನ ಹುದ್ದೆಗೆ ನೊಣ ಮುತ್ತಿದ ಹಾಗೆ ಜನ ಮುತ್ತಲಿಕ್ಕೆ ಆರಂಭಿಸಿದ್ದು ಕಾಣ್ತದೆ. ಇಂದು ಸಾಕಷ್ಟು ಸರ್ಕಾರೀ ಸಂಬಳ ಪಡೆಯುತಿರೋ ಜನರಿರೋ ಕಾಲೇಜುಗಳಲ್ಲಿನ ವ್ಯವಸ್ಥೆಯನ್ನ ಎಲ್ಲರೂ ಗಮನಿಸದೇ ಏನಿಲ್ಲ.‌ ನಮ್ಮ Appraisal ವ್ಯವಸ್ಥೆಯು ಟೊಳ್ಳು ಮರದ ಹಾಗೇ ಬರೇ ನೋಡಲಿಕ್ಕಷ್ಟೇ ಉಂಟು. ಮುಟ್ಟಿದರೆ ಶಕ್ತಿಯೇ ಇಲ್ಲದೇ ಕುಸಿದು ಮಣ್ಣು ಸೇರಿ ಹೋಗಬೋದು ಅನ್ನೋದಕ್ಕೆ ಯಾರೊಬ್ಬರೂ ಸಹ ಅದನ್ನ ಗಂಭೀರವಾಗಿ ಮುಟ್ಟಿಯೇ ಇಲ್ಲವೆಂದು ಕಾಣ್ತದೆ.