ಖಜಾಂಚಿಗಳೇ ಬಾಗಿಲು ತಟ್ಟುತ್ತಿದ್ದದ್ದು. ಸುಂದರ ಸ್ವಪ್ನವೊಂದಕ್ಕುಂಟಾದ ಭಂಗದಿಂದ ಜಕೋಬನಿಗೆ ಸಿಟ್ಟಾಯಿತಾದರೂ, ವಿಷಯ ಗಂಭೀರವೆಂದು ಹೇಳಿದರಿಂದ ಸುಮ್ಮನಿದ್ದ.
Saturday, November 30, 2024
ಕಣ್ ಕಟ್
Sunday, November 17, 2024
ಮುಸುಕು
ಹಾಸಿಗೆ ಮೇಲೆ ಉಸಿರಾಡುತ್ತಲೇ ಹಾಗೆಯೇ ಕಣ್ಣು ನಾಲಿಗೆ ಹೊರ ಬಿಟ್ಟು ಮಲಗಿದ್ದ. ಬದುಕಿದ್ದಾಗಲೇ ಸುಡುವುದು ಅಮಾನವೀಯವೆಂದು ಸುತ್ತ ಕೆಲವರು ಸಾವಿಗಾಗಿ ಎದುರು ನೋಡ್ತಿದ್ದರು. ಸಾಕಷ್ಟು ಜನ, ಮತ್ತೆ ಮೊದಲಿನಂತೆ ಆತ ಎದ್ದು ಕೂರುವನೇ ಎಂದು ನೋಡುತ್ತಿದ್ದರು. ಆದರೆ ಸಾವು ಕೆಳಗೂ ಇಳಿಯದೇ, ಹೊರಗೂ ಹೊರಳದೇ ಗಂಟಲಲ್ಲೇ ಕೂತು ಇವನನ್ನ ಕೇಳಿತು - 'ಈಗ ಹೇಳು. ಹೇಳುವವರೆಗೂ ಈ ಜಾಗ ಬಿಟ್ಟು ಕದಲಲಾಗದು. ನನಗಿದೋ ಆದ ಆಜ್ಞೆ'.
Tuesday, November 5, 2024
Friday, November 1, 2024
ವ್ಯವಸ್ಥಿತ ಅವ್ಯವಸ್ಥೆ!
ಒಮ್ಮೊಮ್ಮೆ ರಕ್ತ ಕುದಿಯುತ್ತದೆ - ಇನ್ನೂ ಯುವಕನಾದ್ದರಿಂದ. ಆದರೂ ತನಗ್ಯಾಕೆ ಎನ್ನುವ ಪ್ರಶ್ನೆಯಿಂದ, ಇದು ತನಗೆ ಸಂಬಂಧ ಪಟ್ಟದ್ದಲ್ಲವೆನ್ನುವ ಹಿಂಜರಿಕೆಯಿಂದ, ಮುಂದೇನಾದರೂ ಆಗಿಬಿಟ್ಟರೆ ಎನ್ನುವ ಭಯದಿಂದ ಸುಮ್ಮನಿರಲೇಬೇಕಾದ ಭ್ರಮಾನಿವಾರ್ಯತೆಯ ಸೃಷ್ಟಿಯಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮೈಗಳ್ಳರು, ಕಾಕರು, ಗೂಂಡಾಗಳು, ರಿಯಲ್ ಎಸ್ಟೇಟ್ ಬಿಸಿನಸ್ಮೆನ್ ಗಳು, ದಲ್ಲಾಳಿಗಳು, ಚೀಟಿ ವ್ಯಾಪಾರಿಗಳು ಹೀಗೇ ಹಣದ ರಾಶಿಯಲ್ಲೇ ಗೋರಿ ಕಟ್ಟಿಸಿಕೊಳ್ಳಬೇಕೆಂದು ಹಟಕ್ಕೆ ಬಿದ್ದು ಹೋದ ಜನರೇ ತುಂಹೋಗಿರೋದು ಎಂಥಾ ವಿಪರ್ಯಾಸವಲ್ಲವೇ? ಅಸಲಿಗೆ ಉನ್ನತ ಶಿಕ್ಷಣದ ಶಿಕ್ಷಕನಿಗೆ (ಸೋ ಕಾಲ್ಡ್ ಪ್ರೊಫೆಸರ್) ಇರೋ ಸಂಬಳ ಒಬ್ಬ ಐ.ಎ.ಸ್ ಅಧಿಕಾರಿಗೂ ಇರದಿರೋದರಿಂದಲೇ ಈ ಶಿಕ್ಷಕನ ಹುದ್ದೆಗೆ ನೊಣ ಮುತ್ತಿದ ಹಾಗೆ ಜನ ಮುತ್ತಲಿಕ್ಕೆ ಆರಂಭಿಸಿದ್ದು ಕಾಣ್ತದೆ. ಇಂದು ಸಾಕಷ್ಟು ಸರ್ಕಾರೀ ಸಂಬಳ ಪಡೆಯುತಿರೋ ಜನರಿರೋ ಕಾಲೇಜುಗಳಲ್ಲಿನ ವ್ಯವಸ್ಥೆಯನ್ನ ಎಲ್ಲರೂ ಗಮನಿಸದೇ ಏನಿಲ್ಲ. ನಮ್ಮ Appraisal ವ್ಯವಸ್ಥೆಯು ಟೊಳ್ಳು ಮರದ ಹಾಗೇ ಬರೇ ನೋಡಲಿಕ್ಕಷ್ಟೇ ಉಂಟು. ಮುಟ್ಟಿದರೆ ಶಕ್ತಿಯೇ ಇಲ್ಲದೇ ಕುಸಿದು ಮಣ್ಣು ಸೇರಿ ಹೋಗಬೋದು ಅನ್ನೋದಕ್ಕೆ ಯಾರೊಬ್ಬರೂ ಸಹ ಅದನ್ನ ಗಂಭೀರವಾಗಿ ಮುಟ್ಟಿಯೇ ಇಲ್ಲವೆಂದು ಕಾಣ್ತದೆ.