Friday, March 28, 2025

ಖಜಾನೆ ಬರಿದಾಗುವ ಹೊತ್ತಲ್ಲಿ

ಆಪ್ತನ ಸಲಹೆಗೆ ಮೆಚ್ಚಿ ರಾಜ ಜಕೋಬ ತಲೆದೂಗಿದ. 'ಈ ರೀತಿಯೆಲ್ಲಾ ಯೋಚಿಸಲು ಒಬ್ಬ ಸಾಮಾನ್ಯನಿಗೆ ಸ್ವಪ್ನಕ್ಕೂ ಅಸಾಧ್ಯ. ನೀನೊಬ್ಬ ಹುಟ್ಟು ಪ್ರತಿಭೆ'. 

 

ಡಂಗೂರ ಸಾರಲಾಯಿತು: 

"ಎಲ್ಲರಿಗೂ ಅತ್ಯದ್ಭುತ ಅವಕಾಶ. ನಿಮ್ಮ ಎಷ್ಟೇ ತಲಮಾರಿನ ಹಿಂದಿನವರನ್ನ ಉಸಿರಾಡಿಸಲು ಸುವರ್ಣಾವಕಾಶ. ಒಂದೊಂದು ಸಮಾಧಿಗೂ, ಹೆಣದ ತಲಮಾರಿನಾಧಾರ ನಿಗದಿಪಡಿಸಿದ ಕಾಸು ತೆತ್ತರಷ್ಟೇ ಸಾಕು".