Sunday, May 17, 2020

ಮಾದುರಿ ಗುಗ್ಗ

  ಕಿಟ್ಟಿ ಹೆಚ್ಚು ಹೆದರುತ್ತಿದ್ದದ್ದು ಅಮ್ಮನ ಮಾದುರಿ ಗುಗ್ಗಕ್ಕೆ. ಕಿಟ್ಟಿಯ ಮನೆಯ ನಡುಮನೆಯಲ್ಲಿದ್ದ ರೂಮಿನ ಮೇಲೆ ಒಂದು ಅಟ್ಟವಿತ್ತು. ಅಡುಗೆ ಮನೆಯಿಂದ ನಡುಮನೆಯ ಹಾದಿಯಾಗಿ ರೂಮಿಗೆ ಹೋಗಬೇಕಾದರೆ ಈ ಅಟ್ಟದ ಬಾಯಿ ಕಾಣುತ್ತಿತ್ತು. ಅದು ಎಂದಿಗೂ ಕತ್ತಲೇ. ಅದಕ್ಕೆ ಅದು ಅಷ್ಟು ರಹಸ್ಯಮಯವಾಗಿ ಕಂಡದ್ದು. ಒಮ್ಮೆ ಕಿಟ್ಟಿ ಅಮ್ಮನಿಗೆ ಕೇಳಿದ – ‘ಅಮ್ಮ ಅಲ್ಲೇನಿದೆ?’


‘ಅಲ್ಲಿ ಮಾದುರಿ ಗುಗ್ಗಾ ಇದೆ. ಗಲಾಟೆ ಮಾಡೋ ಮಕ್ಕಳನ್ನ ಹಿಡ್ಕೊಂಡು ಹೋಗಿ ತಿಂದು ಬಿಡತ್ತೆ’ ಅಂತ ಅಮ್ಮ ಗಡುಸು ಧ್ವನಿಯಲ್ಲಿ ಹೆದರಿಸಿದಾಗಿಂದ ಕಿಟ್ಟಿ ನಡುಮನೆ ದಾಟುವಾಗ ಪಕ್ಕೆಂದು ಓಡಿಬಿಡುತ್ತಿದ್ದ.  

Monday, April 27, 2020

ಕಿಟ್ಟೀಸ್ ಲವ್ (s)!

 (ಕಿಟ್ಟಿಯ ಕಥಗಳು)


ಕಿಟ್ಟಿಯ ವಯಸ್ಸು ದಾಖಲಾತಿಯಲ್ಲಿ ೧ ವರ್ಷ ಹಿಂದಕ್ಕೆ ಹೋಗಿದ್ದು ಕಿಟ್ಟಿಗೆ ಗೊತ್ತಾಗಿರಲಿಲ್ಲ, ಗೊತ್ತಾಗುತ್ತಲೂ ಇರಲಿಲ್ಲ. ಅವನಿಗೆ ಯೂಕೆ.ಜಿಯೋ ಒಂದನೇ ತರಗತಿಯೋ, ಯಾವುದಾದರೂ ವಾತಾವರಣ ಹೊಸತದ್ದೆ. ಮೊದಲಿಗೆ ಶಾಲೆಗೆ ಹೋಗಲು ಅಳುತ್ತಿದ್ದ ಕಿಟ್ಟಿ, ಅಮ್ಮನ ಹೊಡೆತ ತಾಳಲಾರದೆ ಶಾಲೆಯೇ ಪರವಾಗಿಲ್ಲವೆಂದು ಹೊರಡಲಾರಂಭಿಸಿದ. ಅಕ್ಕ ವೇಗವಾಗಿ ನಡೆದುಗೋಗಲು ಸಾಧ್ಯವಾಗದಂತೆ ದಾರಿಯುದ್ದಕ್ಕೂ ಆಕೆಯ ಲಂಗವನ್ನು ಹಿಡಿದುಕೊಂಡು, ನಡೆವುಯೆಲ್ಲಾದರೂ ಏರೋಪ್ಲೇನ್ ಚಿಟ್ಟೆ (ಡ್ರಾö್ಯಗನ್ ಫ್ಲೆöÊ) ಕಂಡರೆ ಅದು ಅವನ ಕಣ್ಣೋಟದ ಅಂಗಳದಿAದ ಆಚೆಗೆಲ್ಲೋ ಹೋಗುವವರೆಗೂ ಅಲ್ಲೇ ಅಕ್ಕಳ ಲಂಗವನ್ನು ಹಿಡಿದು ನೋಡುತ್ತಾ ನಿಂತಿದ್ದು ಶಾಲೆ ತಲುಪುವಷ್ಟರಲ್ಲಿ ಬೆಳಗ್ಗಿನ ಪ್ರೇಯರ್ ಮುಗಿದು ಎಲ್ಲರೂ ತರಗತಿಗೆ ತೆರಳಿರುತ್ತಿದ್ದರು. ಪಿ.ಟಿ. ಮಾಸ್ಟರ್ ಕೆಂಷಪ್ಪ (ಅವರ ಮುಖ ಕೆಂಚಗಿತ್ತೆAದು ಎಲ್ಲರೂ ಕೆಂಚಪ್ಪನೆAದು ಕರೀತಿದದ್ದು) ಮಾತ್ರ, ಹೊರಗೆ ಸ್ಲೆöÊಂಡಿಗ್ ಗೇಟಿನ ಬಳಿ ಲೇಟಾಗಿ ಬರುತ್ತಿದ್ದ ಮಕ್ಕಳಿಗಾಗಿಯೇ ಕಾದು ನಿಂತಿರುತ್ತಿದ್ದರು. ಕೆಂಚಪ್ಪ ಹೊಡೆಯುತ್ತಿರಲಿಲ್ಲ. ಬದಲಾಗಿ ಮತ್ತೊಂದು ಘೋರ ಶಿಕ್ಷೆ ನೀಡುತ್ತಿದ್ದರು – ೫ ಪೇಜ್ ಕಾಪಿ ರೈಟಿಂಗ್ ಬರೆಯುವುದು. ಕಿಟ್ಟಿಯ ಅಕ್ಕಳಿಗೆ ಇದಕ್ಕಿಂತ ಹೊಡೆತವೇ ಪರವಾಗಿರಲಿಲ್ಲ – ಏಕೆಂದರೆ ಆಕೆ ೧೦ ಪೇಜ್ ಬರಯಬೇಕಿತ್ತಲ್ಲ ಕಿಟ್ಟಿಯದ್ದೂ ಸೇರಿ.

Sunday, April 26, 2020

ಓಣಿಯ ದೆವ್ವ

(ಕಿಟ್ಟಿಯ ಕಥೆಗಳು)


ಕಿಟ್ಟಿಗೆ ಆಗ ೬ ವರ್ಷ. ೧ನೇ ತರಗತಿಯಲ್ಲಿ ಓದುತ್ತಿರಬೇಕಿತ್ತು. ಆದರೆ ದಾಖಲೆಯಲ್ಲೇ ಅವನಿಗೆ ೫ ವರ್ಷ ಮಾಡಿ ಮತ್ತೆ ಯೂ.ಕೆ.ಜಿ. ಗೆ ಹಾಕಬೇಕಾದ ಪರಿಸ್ಥಿತಿ ಬಂದಿತ್ತು. ಕಿಟ್ಟಿಗೆ ಬರ್ತಿದ್ದ ‘ಅ, ಆ, ಇ , ಈ’ ಅನ್ನೋ ನಾಲ್ಕು ಅಕ್ಷರದಿಂದ ಒಂದು ನ್ಯೂಸ್ ಪೇರ‍್ರನ್ನು ಓದಲು ಸಾಧ್ಯವೇ ಇರಲಿಲ್ಲ. ಅಕ್ಷರಗಳೆಂದರೆ ಅರ್ಥವೇ ತಿಳಿಯದ ಅವನಿಗೆ ನ್ಯೂಸ್ ಪೇಪರಿನಲ್ಲಿ ಕಂಡಿದ್ದೆಲ್ಲಾ ಚಿತ್ರಗಳೇ.

Friday, March 13, 2020

ನೆರವು


ಒಳಗೊಳಗೆ ಕುದಿದು ಕುದಿದು ಹೋಗುತ್ತಿದ್ದಾನೆ – ಜಗದ ಅತೀ ಜಡ ವಸ್ತುವೆಂದೋ? ಯಾರಿಗೂ ಬಾರದ ನಿರುಪಯೋಗಿಯೆಂದೋ? ಅದು ಅವನ ಕೋಪದ ಪ್ರತೀಕವಲ್ಲ, ಅವನ ಮುಖದ ಮೇಲಿನ ಕೆಂಪು ಅಗ್ನಿ. ಅದೋ! ಎದುರು ಮನೆಗೆ ಬೆಂಕಿ ಬಿದ್ದಿತು. ಧಗ ಧಗನೆ ಉರಿಯಿತು. ಇವನಿನ್ನು ತಡೆಯಲಾರ. ಕೆಂಪಲ್ಲಿ ಕೆಂಪಾಗಲು, ತನ್ನನ್ನೊಬ್ಬ ನಿರುಪಯೋಗಿಯೆನಬಹುದಾದ ಇಡೀ ಜಗತ್ತಿನ ಜನರ ಬಾಯಿಗೆ ಬೀಗ ಜಡಿಯಲು, ಜಗತ್ತನ್ನು ಈ ಬೆಂಕಿಯ ಕೆನ್ನಾಲಿಗೆಯಿಂದ ಪಾರುಮಾಡಿ ದೇವರೆನಿಸಲು ಧುಮುಕಿದ ಬೆಂಕಿಗೆ - ತನಗಾಗಿಗೇ! ತನಗಾಗಿಯೇ!


ಹೊತ್ತಿತು, ಹೊತ್ತಿಯೇ ಹೊತ್ತಿತು. ತಡೆಯಲಾರದೆ ಓಡಿದ. ಮತ್ತೊಂದು ಮನೆ ಹತ್ತಿತು. ಇನ್ನೊಂದು. ನೋಡಿ ನೋಡಿ. ಓಡಿ. ಇಲ್ಲ ನಿಮ್ಮ ಬಳಿಯೂ ಬಂದಾನು! ನಮ್ಮನ್ನೂ ಹೊತ್ತಿಸಿಯಾನು. ಜಡತ್ವವೇ ಲೇಸಿದ್ದಿತ್ತು.

Saturday, January 11, 2020

ಭಯ


“ಭಯ... ಭಯ... ಓಹ್! ಬೆಳಕು, ಬೆಳಕು... ದಯಮಾಡಿ ಬಾಗಿಲು ಮುಚ್ಚಿರಿ. ನಾನು ಕಂಡು ಬಿಟ್ಟರೆ? ಅಯ್ಯೋ! ಎಂಥಾ ದರಿದ್ರ ರೂಪವಿದು. ಜನ ಉಗಿದಾರು, ಹೊಡೆದಾರು, ನನ್ನ ಹರಿದು ನಾಲ್ಕಾರು ಕಡೆ ಎಸೆದಾರು. ನನ್ನ ನೋಡಿದೊಂದಿಬ್ಬರು ನನ್ನೀ ವೇಷದ ಬಗೆಗಿನ ಸತ್ಯವನ್ನು ಮುಚ್ಚಿಟ್ಟರು! ನನ್ನೆಡೆಗಿನ ಮರುಕವೇ? ಅಲ್ಲ.. ಅಲ್ಲ.. ನನ್ನ ಹುಟ್ಟಿಸಿದಾತನೊಟ್ಟಿಗಿನ ವಿಶ್ವಾಸವೇ? ಅಯ್ಯೋ.. ಆತ ಕುರುಡಾಗಿ ಹೋಗಿದ್ದಾನೆ! ಹೀಗೆಯೇ.. ಹೀಗೆಯೇ.. ನನ್ನ ಹಾಗೆಯೇ ವಿಕಾರ, ಕುರೂಪ, ಅಸಹ್ಯಕರ ಜೀವಿಗಳನ್ನ ಹುಟ್ಟಿಸಿ ಜಗತ್ತಿಗೆಲ್ಲಾ ತೋರಿಸಿಬೇಕೆಂದಿದ್ದಾನೆ! ಅಯ್ಯೋ.. ಅಯ್ಯೋ.. ನೀವಾದರೂ ಹೇಳಬಾರದೆ? ಆತನಿಗೇನೂ ಕಾಣಲಾರದು... ದಯಮಾಡಿ ಎಲ್ಲಾ ತಿಳಿದ ನೀವು ಹೀಗೆ ನಮ್ಮ ಮೇಲೆ ಬೆಳಕ್ಹಾಯಿಸಬೇಡಿ.. ನಾವು ಕಂಡುಬಿಟ್ಟರೆ? ಅಯ್ಯೋ.. ಬೆಳಕು, ಭಯ ಭಯ...”ನನ್ನ ಲೇಖನಗಳ ಈ ಆರ್ತನಾದ ದಿನಾ ರಾತ್ರಿಯ ಕನಸಿನಲ್ಲಿ ಕೇಳಿಸುತ್ತಿದೆಯಲ್ಲಾ?


Thursday, January 9, 2020

ಮುರಿದ ಮೌನ

  ಆಕೆಯಿಂದು ಮೌನ ಮುರಿದಿದ್ದಾಳೆ. ನನಗವಳು ತೀರ ಹತ್ತಿರದ ಪರಿಚಯ. ಪ್ರತೀ ಸಂಜೆ, ಇಗೋ ಇಲ್ಲೇ ಈ ಜಾಗದಲ್ಲೇ, ನನ್ನ ಪಕ್ಕದಲ್ಲೇ ಮೌನವಾಗಿ ಕುಳಿತಿರುತ್ತಿದ್ದಳು. ಆಕೆ ಮೂಕಿಯೆಂದು ಭಾವಿಸಿದ್ದೆ. ಓಹ್! ಇದೇನಿದು ಇಂದು? ಆಕೆಯ ಮಾತುಗಳು ತಡೆಯಲಾಗದಷ್ಟು ಅಸಂಬದ್ಧವಾಗಿವೆಯೇ! ಅಗೋ, ಅಗೋ, ನಿಮ್ಮನ್ನು ರೊಚ್ಚಿಗೇಳಿಸುವಷ್ಟು ಅವೈಜ್ಞಾನಿಕವಾಗಿ ಮಾತನಾಡುತ್ತಿದ್ದಾಳಲ್ಲವೇ. ಆಕೆಗೆ ಬೈದು, ಆಕೆಯ ಬಾಯಿ ಮುಚ್ಚಿಸಿ ಓಡಿಸಿಬಿಡಬೇಕೆಂದು ಓಡೋಡಿ ಬಂದಿರಲ್ಲವೇ? ಹ್ಹ..ಹ್ಹ.. ನಿಮ್ಮ ಹಾಗೆ ಆಕೆಗೆ ‘ನಾ ನಿನ್ನ ಮಾತುಗಳನ್ನು ಕೇಳಲಾರೆ’ ಎಂದು ಹೇಳಲಾಗದ ಮೂಕನೇನೋ ಹೌದು ನಾನು. ಅಶಕ್ತನೆಂದು ಸುಮ್ಮನಿಲ್ಲ. ಆಕೆಯದ್ದೇ ಆದ ಮಾತುಗಳು ಕೇಳುಗರಿಲ್ಲದೆ ಆಕೆಯನ್ನು ಇರಿದು ಕೊಂದು ಮೂಕಿಯಾಗಿಸಿದ್ದು. ನಾನೂ ಸಹ ಕೋಪಿಸಿಕೊಂಡರೆ? ಮತ್ತೇ ಕೇಳುಗರಿಲ್ಲದೇ ಹೋದರೆ?


 

Sunday, July 21, 2019

ಫುಲ್‌ಟೈಮ್‌ ಸೋಂಬೇರಿ!

 


ಕಾಡಿನ ಸಾನ್ನಿಧ್ಯ ಇದ್ದಕ್ಕಿದ್ದ ಹಾಗೆ ಬೇಕೆನಿಸಿತು. ನಮ್ಮ ಮೆದುಳಿನ ಕಾರ್ಯಪ್ರವೃತ್ತಿ ಅತೀ ವಿಚಿತ್ರ. ಅದೇಕೆ ತೇಜಸ್ವಿಯ ʻಸೋಂಬೇರಿ ಮೋರೆಯ ಕಾಡುʼ ಇದ್ದಕ್ಕಿದ್ದ ಹಾಗೆ ನೆನಪಾಯಿತು? ಅದೇಕೆ ತೇಜಸ್ವಿ ಆ ಮಳೆಗಾಲದಲ್ಲಿ ಮೂಡಿಗೆರೆಯ ಜೇನು ಸೊಸೈಟಿಯ ಬಾಗಿಲು ತೆಗೆಯುವ ಚಿತ್ರ ಇದ್ದಕ್ಕಿದ್ದ ಹಾಗೆ ಎಲ್ಲಿಂದಲೋ ಹಾರಿ ಬಂದು ಕಣ್ಣ ಮುಂದೆ ನಿಂತಿತು? ಈಕೆ ಮಲೆನಾಡಿನವಳನ್ನೋದೇನೋ ನನಗೆ ನಿಜವಾಗಿಯೂ ನೆಮ್ಮದಿಯೇ. ಆದರೆ ಮನಸ್ಸು ಮೇಗೂರಿನ ನಾಗಾನಂದರ ಮನೆಗೆ ಸೆಳೆಯುತ್ತಿದೆ. ಆ ಮನೆಯಲ್ಲಿ ಓದಿದ್ದ ಅಣ್ಣನ ನೆನಪು, ಮನೆಯೆಲ್ಲಾ ಪ್ರತಿಧ್ವನಿಸುತ್ತಿದ್ದ ನಗು, ಆ ಛಳಿಯಲ್ಲಿ ಹೊದೆದಿದ್ದ ಕಂಬಳಿ,