Sunday, July 21, 2019

ಫುಲ್‌ಟೈಮ್‌ ಸೋಂಬೇರಿ!

 


ಕಾಡಿನ ಸಾನ್ನಿಧ್ಯ ಇದ್ದಕ್ಕಿದ್ದ ಹಾಗೆ ಬೇಕೆನಿಸಿತು. ನಮ್ಮ ಮೆದುಳಿನ ಕಾರ್ಯಪ್ರವೃತ್ತಿ ಅತೀ ವಿಚಿತ್ರ. ಅದೇಕೆ ತೇಜಸ್ವಿಯ ʻಸೋಂಬೇರಿ ಮೋರೆಯ ಕಾಡುʼ ಇದ್ದಕ್ಕಿದ್ದ ಹಾಗೆ ನೆನಪಾಯಿತು? ಅದೇಕೆ ತೇಜಸ್ವಿ ಆ ಮಳೆಗಾಲದಲ್ಲಿ ಮೂಡಿಗೆರೆಯ ಜೇನು ಸೊಸೈಟಿಯ ಬಾಗಿಲು ತೆಗೆಯುವ ಚಿತ್ರ ಇದ್ದಕ್ಕಿದ್ದ ಹಾಗೆ ಎಲ್ಲಿಂದಲೋ ಹಾರಿ ಬಂದು ಕಣ್ಣ ಮುಂದೆ ನಿಂತಿತು? ಈಕೆ ಮಲೆನಾಡಿನವಳನ್ನೋದೇನೋ ನನಗೆ ನಿಜವಾಗಿಯೂ ನೆಮ್ಮದಿಯೇ. ಆದರೆ ಮನಸ್ಸು ಮೇಗೂರಿನ ನಾಗಾನಂದರ ಮನೆಗೆ ಸೆಳೆಯುತ್ತಿದೆ. ಆ ಮನೆಯಲ್ಲಿ ಓದಿದ್ದ ಅಣ್ಣನ ನೆನಪು, ಮನೆಯೆಲ್ಲಾ ಪ್ರತಿಧ್ವನಿಸುತ್ತಿದ್ದ ನಗು, ಆ ಛಳಿಯಲ್ಲಿ ಹೊದೆದಿದ್ದ ಕಂಬಳಿ,