ಕಳೆದ ವರ್ಷದ ದಸರ ಅಕ್ಕ ರುಕ್ಮಿಣಿ ಇಲ್ಲದೆಯೇ ನಡೆದಿತ್ತು. ಶ್ರೀನಿಗೆ ಮರೆತು ಹೋಗಿತ್ತು, ಕಳೆದ ದಸರೆಗೆ ರುಕ್ಮಿಣಿ ಏಕಿರಲಿಲ್ಲವೆಂದು. ಅದನ್ನು ಯೋಚಿಸಲೂ ಆತ ಶ್ರಮವಹಿಸಲಿಲ್ಲ. ಎಲ್ಲೋ ಅಮ್ಮ - ಮಗಳ ಜಗಳ ಅತಿರೇಕಕ್ಕೆ ಹೋಗಿದ್ದರಿಂದ ಇದ್ದರಿಬೋದು ಎಂದು ಅತೀ ಸುಲಭವಾದ ಕಾರಣವೊಂದನ್ನ ಮನೆಯಲ್ಲಿ ಎಲ್ಲರೂ ಊಹಿಸುವ ರೀತಿಯಲ್ಲೇ ಅವರಿಬ್ಬರೂ ಇದ್ದದ್ದು. ಆದರೆ ಈ ಬಾರಿ ಮಗಳೇ ದಸರೆಗೆ ಮೈಸೂರಿಗೆ ಬರ್ತೇನೆ ಅಂತ ಅಮ್ಮನ ಬಳಿ ಖುಷಿಯಿಂದ ಹೇಳಿದ್ದೂ ಮನೆಯವರಿಗೆ ಹೊಸತೇನಾಗಿರಲಿಲ್ಲ. ಅವರಿಬ್ಬರ ಸಂಬಂಧ ಹಾಗೆಯೇ - ಯಾವಾಗ ಕೆಡ್ತದೆ, ಯಾವಾಗ ರಿಪೇರಿಯಾಗ್ತದೆಯಂತ ಊಹಿಸಲಸಾಧ್ಯ. ಆದರೆ ಕೆಟ್ಟಿದ್ದು ಎಂದಾದರೂ ರಿಪೇರಿಯಾಗ್ತದೆ ಅನ್ನೋದಂತೂ ನಿಜ.
Monday, April 29, 2024
Sunday, April 21, 2024
ದ್ವಾರಬಂಧ
Saturday, March 9, 2024
Sunday, January 14, 2024
Thursday, January 11, 2024
ಪರಿ'ಭ್ರಮ'ಣೆ
ಖಾಲೀ ಇದ್ದ ರಸ್ತೆಯಲ್ಲಿ ಕಾರಿನ ವೇಗ ತಗ್ಗಿಸಿ ನಿಧಾನಕ್ಕೆ ಹೋಗುತ್ತಿದ್ದಾಗಲೇ ರಮೆಗೆ ಅನುಮಾನ ಬಂದಿತು - ಕಿಟ್ಟಿ ಏನೋ ಗಹನವಾದ ಆಲೋಚನೆಯಲ್ಲಿದ್ದಾನೆಂದು. ಚಳಿಗಾಲದ ಮುಂಜಾವು. ಕಿಟಕಿಗಳೆಲ್ಲಾ ಏರಿಸಿದ್ದವು. ಕಾರು ರಮೆಯ ತವರಿನ ಕಡೆ ಹೊರಟಿತ್ತು. ರೋಡು ಎಷ್ಟೇ ಹಾಳಾಗಿದ್ದರೂ, ಮೈಸೂರಿನಿಂದ ಶಿವಮೊಗ್ಗಕ್ಕೆ ಕೆ.ಆರ್. ಪೇಟೆ ಮುಖಾಂತರವೇ ಕಿಟ್ಟಿ ಹೋಗ್ತಿದ್ದದ್ದು. ಕೆ.ಆರ್.ಪೇಟೆ ದಾಟುವವರೆಗೂ, ರೋಡುಗಳ ಸ್ಥಿತಿಗೆ ಈತ ಬೈದುಕೊಳ್ಳೋದೂ ಸಹ ಪ್ರತೀ ಪ್ರಯಾಣದ ಅಂಗವಾಗಿಹೋಗಿತ್ತು. ಬಹಳ ಸಾರಿ ತಮಾಷೆಯೂ ಮಾಡ್ತಿದ್ದ, ನಾನು ಕಣ್ಣು ಮುಚ್ಚಿ ಓಡಿಸಿದ್ರೂ ಹೇಳಬಲ್ಲೇ ಕೆ. ಆರ್. ಪೇಟೆ ಮುಗಿಸಿ ಹಾಸನ ಜಿಲ್ಲೆಯ ರೋಡಿಗೆ ಗಾಡಿ ಇಳಿದದ್ದನ್ನ ಎಂದು. ಆದರೆ ಇತ್ತೀಚೆಗೆ ಎಲೆಕ್ಷನಿನ ಆಸುಪಾಸು ರೋಡಿನ ಹಳ್ಳಗಳಿಗೆಲ್ಲಾ ಅಲ್ಲಲ್ಲಿ ತೇಪೆ ಹಚ್ಚಿ ಪ್ರಯಾಣ ಅಷ್ಟೇನು ಪ್ರಯಾಸಕರವಾಗದಿರುವಂತೆ ರೋಡನ್ನ ಸಿದ್ಧಗೊಳಿಸಿದ್ದರು.
Sunday, January 7, 2024
ಮೌನದ ಮಾತು - 9
ಬ್ರೇಕ್
ಒಣಗಿದಾ ನಾಲಗೆಗೆ ಎರಡ್ಹನಿ ಸೋಕಿದಂತೆ
ಮುಳುಗುತಿಹ ಇರುವೆಗೊಂದು ಹುಲುಕಡ್ಡಿ ಆಸರಿಸಿದಂತೆ
ಜಾತ್ರೆಯಲ್ ತಪ್ಪಿದ ಕೂಸಿಗದರಮ್ಮನ ದನಿ ಕೇಳಿಸಿದಂತೆ
ಎಡೆಬಿಡದೆ ಸುರುಯುತಿರೋ ಮಳೆಯ ನಡುವೊಮ್ಮೆ ರವಿಯು ಇಣುಕಿದಂತೆ
ಜೀವನದ ವಿರಾಮವೂ...