Monday, April 29, 2024

ರುಕ್ಕು

 ಕಳೆದ ವರ್ಷದ ದಸರ ಅಕ್ಕ ರುಕ್ಮಿಣಿ ಇಲ್ಲದೆಯೇ ನಡೆದಿತ್ತು. ಶ್ರೀನಿಗೆ ಮರೆತು ಹೋಗಿತ್ತು, ಕಳೆದ ದಸರೆಗೆ ರುಕ್ಮಿಣಿ ಏಕಿರಲಿಲ್ಲವೆಂದು. ಅದನ್ನು ಯೋಚಿಸಲೂ ಆತ ಶ್ರಮವಹಿಸಲಿಲ್ಲ. ಎಲ್ಲೋ ಅಮ್ಮ - ಮಗಳ ಜಗಳ ಅತಿರೇಕಕ್ಕೆ ಹೋಗಿದ್ದರಿಂದ ಇದ್ದರಿಬೋದು ಎಂದು ಅತೀ ಸುಲಭವಾದ ಕಾರಣವೊಂದನ್ನ ಮನೆಯಲ್ಲಿ ಎಲ್ಲರೂ ಊಹಿಸುವ ರೀತಿಯಲ್ಲೇ ಅವರಿಬ್ಬರೂ ಇದ್ದದ್ದು. ಆದರೆ ಈ ಬಾರಿ ಮಗಳೇ ದಸರೆಗೆ ಮೈಸೂರಿಗೆ ಬರ್ತೇನೆ ಅಂತ ಅಮ್ಮನ ಬಳಿ ಖುಷಿಯಿಂದ ಹೇಳಿದ್ದೂ ಮನೆಯವರಿಗೆ ಹೊಸತೇನಾಗಿರಲಿಲ್ಲ. ಅವರಿಬ್ಬರ ಸಂಬಂಧ ಹಾಗೆಯೇ - ಯಾವಾಗ ಕೆಡ್ತದೆ, ಯಾವಾಗ ರಿಪೇರಿಯಾಗ್ತದೆಯಂತ ಊಹಿಸಲಸಾಧ್ಯ. ಆದರೆ ಕೆಟ್ಟಿದ್ದು ಎಂದಾದರೂ ರಿಪೇರಿಯಾಗ್ತದೆ ಅನ್ನೋದಂತೂ ನಿಜ. 

Sunday, April 21, 2024

ದ್ವಾರಬಂಧ

 

ಸುಮಾರು ಹತ್ತು ವರ್ಷಗಳ ಕೆಳಗೆ ಯೂನಿವರ್ಸಿಟಿಗೆ ಈಗಿನ ರೀತಿಯ ದ್ವಾರಬಂಧಗಳಾಗಲೀ, ಭದ್ರತೆಯಾಗಲೀ ಇರಲಿಲ್ಲ. ಯೂನಿವರ್ಸಿಟಿಯ ಒಳಗಿನ ಡಬಲ್ ರೋಡಿನಲ್ಲಿ - ಆಗಿನ್ನೂ ಈಗಿನ ರೀತಿ ಮಧ್ಯ ಒಂದು ಡಿವೈಡರ್ ಸಹ ಇರಲಿಲ್ಲ- ಬಸ್ಸುಗಳೇ ಓಡಿಯಾಡ್ತಿದ್ವು. ಹಾಗಾಗಿ ಈಗಲೂ ಯೂನಿವರ್ಸಿಟಿಯ ಒಳಗೆ ಕೆಲವು ಕಡೆ ಬಸ್ ಸ್ಟಾಪುಗಳನ್ನ ಕಾಣಬೋದು. ರಾತ್ರಿ ಯಾವ ಸಮಯದಲ್ಲಿ ಬೇಕಾದರೂ ಯೂನಿವರ್ಟಿಯ ಒಳಗೆ ಬರಲಿಕ್ಕೆ ಅಥವಾ ಹೊರಗೆ ಹೋಗಲಿಕ್ಕೆ ಹತ್ತಾರು ದಾರಿಗಳಿದ್ವು. ಆ ದಾರಿಗಳ ಇಕ್ಕೆಲಗಳಲೆಲ್ಲಾ ಮರ ಗಿಡ ಗೆಂಟೆಗಳೇ. ಸದಾನಂದ ಎರಡನೇ ವರ್ಷದ ಎಂ.ಎಸ್ಸಿಗೆ ಬರುವ ವೇಳೆಗೆ ದ್ವಾರಬಂಧಗಳ ನಿರ್ಮಾಣ ಆರಂಭವಾಗಿ, ಎಂ.ಎಸ್ಸಿ ಮುಗಿಯುವ ವೇಳೆಗೆ ಸಂಪೂರ್ಣಗೊಂಡಿತು. ಬಸ್ಸುಗಳೂ, ಯೂನಿವರ್ಸಿಟಿಗೆ ಸಂಬಂಧ ಪಡದ ವಾಹನಗಳೂ ಎಲ್ಲದರ ಎಂಟ್ರಿ ಬಂದಾಯಿತು.  ಯಾರೆಂದರಾಗಲೀ ಸಂಜೆ ಕತ್ತಲಿನ ಮೇಲೆ ಒಳಗೆ ನುಗ್ಗಲು ಸಾಧ್ಯವೇ ಇಲ್ಲ. ಗೇಟಿನಲ್ಲಿ ವಾಚ್ ಮೆನ್ ಗಳಿಗೆ ಕಾರಣ ನೀಡಬೇಕು. ಹಾಸ್ಟಲ್ ಹುಡುಗಿಯರಂತೂ ಸಂಜೆ ಏಳರ ಮೇಲೆ ಹಾಸ್ಟಲಿನಿಂದಲೇ ಹೊರಗೆ ಅನುಮತಿಯಿಲ್ಲದೇ ಕಾಲಿಡಲಾಗುತ್ತಿರಲಿಲ್ಲವಾದ್ದರಿಂದ, ಸಂಜೆ ಏಳು‌‌ಗಂಟೆಯ ಮೇಲೆ ಹುಡುಗಿಯರು ಯೂನಿವರ್ಸಿಟಿಯ ಒಳಗೆ ಹೋಗೋದು ಅಪರೂಪವೇ.

Saturday, March 9, 2024

ಮೌನದ ಮಾತು - 11

ತಪಸಾ ಬ್ರಹ್ಮ ವಿಜಿಜ್ಞಾಸಸ್ವ...

 ಸ ತಪೋ ತಪ್ಯತಾ! ಸ ತಪಸ್ತಪ್ವಾ 

ಆನಂದಂ ಬ್ರಹ್ಮೇತಿ ವ್ಯಜಾನಾತ್..





Sunday, January 14, 2024

ಮೌನದ ಮಾತು - 10

 

ವಿಧಿ

ಇನ್ನೇನು ಕಡಿಸಿಕೊಂಡು ನೆಲವನಪ್ಪೇ ಬಿಡುವೆನೆನುವ ಆಸೆಯಲ್ಲಿ  

ಇಲ್ಲೇ ಹೀಗೆ ಎಂದಿಗೂ ಯಾರದೋ ಸೆರೆಯಲ್ಲಿ... 





Thursday, January 11, 2024

ಪರಿ'ಭ್ರಮ'ಣೆ

ಖಾಲೀ ಇದ್ದ ರಸ್ತೆಯಲ್ಲಿ ಕಾರಿನ ವೇಗ ತಗ್ಗಿಸಿ ನಿಧಾನಕ್ಕೆ ಹೋಗುತ್ತಿದ್ದಾಗಲೇ ರಮೆಗೆ ಅನುಮಾನ ಬಂದಿತು - ಕಿಟ್ಟಿ ಏನೋ ಗಹನವಾದ ಆಲೋಚನೆಯಲ್ಲಿದ್ದಾನೆಂದು. ಚಳಿಗಾಲದ ಮುಂಜಾವು. ಕಿಟಕಿಗಳೆಲ್ಲಾ ಏರಿಸಿದ್ದವು.  ಕಾರು ರಮೆಯ ತವರಿನ ಕಡೆ ಹೊರಟಿತ್ತು. ರೋಡು ಎಷ್ಟೇ ಹಾಳಾಗಿದ್ದರೂ, ಮೈಸೂರಿನಿಂದ ಶಿವಮೊಗ್ಗಕ್ಕೆ ಕೆ.ಆರ್. ಪೇಟೆ ಮುಖಾಂತರವೇ ಕಿಟ್ಟಿ ಹೋಗ್ತಿದ್ದದ್ದು. ಕೆ.ಆರ್.ಪೇಟೆ ದಾಟುವವರೆಗೂ, ರೋಡುಗಳ ಸ್ಥಿತಿಗೆ ಈತ ಬೈದುಕೊಳ್ಳೋದೂ ಸಹ ಪ್ರತೀ ಪ್ರಯಾಣದ ಅಂಗವಾಗಿಹೋಗಿತ್ತು. ಬಹಳ ಸಾರಿ ತಮಾಷೆಯೂ ಮಾಡ್ತಿದ್ದ, ನಾನು ಕಣ್ಣು ಮುಚ್ಚಿ ಓಡಿಸಿದ್ರೂ ಹೇಳಬಲ್ಲೇ ಕೆ. ಆರ್. ಪೇಟೆ ಮುಗಿಸಿ ಹಾಸನ ಜಿಲ್ಲೆಯ ರೋಡಿಗೆ ಗಾಡಿ ಇಳಿದದ್ದನ್ನ ಎಂದು‌. ಆದರೆ ಇತ್ತೀಚೆಗೆ ಎಲೆಕ್ಷನಿನ ಆಸುಪಾಸು ರೋಡಿನ ಹಳ್ಳಗಳಿಗೆಲ್ಲಾ ಅಲ್ಲಲ್ಲಿ ತೇಪೆ ಹಚ್ಚಿ ಪ್ರಯಾಣ ಅಷ್ಟೇನು ಪ್ರಯಾಸಕರವಾಗದಿರುವಂತೆ ರೋಡನ್ನ ಸಿದ್ಧಗೊಳಿಸಿದ್ದರು‌.

Sunday, January 7, 2024

ಮೌನದ ಮಾತು - 9

 ಬ್ರೇಕ್ 

ಒಣಗಿದಾ ನಾಲಗೆಗೆ ಎರಡ್ಹನಿ  ಸೋಕಿದಂತೆ

ಮುಳುಗುತಿಹ ಇರುವೆಗೊಂದು ಹುಲುಕಡ್ಡಿ ಆಸರಿಸಿದಂತೆ 

ಜಾತ್ರೆಯಲ್ ತಪ್ಪಿದ ಕೂಸಿಗದರಮ್ಮನ  ದನಿ ಕೇಳಿಸಿದಂತೆ  

ಎಡೆಬಿಡದೆ ಸುರುಯುತಿರೋ ಮಳೆಯ ನಡುವೊಮ್ಮೆ ರವಿಯು ಇಣುಕಿದಂತೆ

ಜೀವನದ ವಿರಾಮವೂ...