Thursday, July 22, 2021

ಏಯ್ ಡೆಡ್…

 

ಗುಡ್ಡದ ಮೇಲಿದ್ದ ವಾಟೆರ್ ಟ್ಯಾಂಕಿನ ಮೇಲೆ ಗಾಳಿಗೆ ಮೈಯೊಡ್ಡಿ ಕುಳಿತುಕೊಳ್ಳುವ ಆಸೆ ಇದ್ದಕ್ಕಿದ್ದ ಹಾಗೆ ಅವನಿಗೆ ಮೂಡಿತು. ದಟ್ಟ ಮಲೆನಾಡೇನಲ್ಲ ಅದು. ಆದರೂ ಸಿಟಿಯ ಡಾಂಬರು, ಕಾರು-ಬಾರುಗಳ, ಜನ-ಮನಗಳ ಜಂಗುಳಿಯ ಮುಂದೆ ಅತೀ ವಿಶಿಷ್ಟವಾದದ್ದು, ಬೇಕೆ ಬೇಕೆನಿಸುವಂಥದ್ದು ಆ ಗಾಳಿಯ ಪ್ರವಾಹ. ಗುಡ್ಡ’, ತಪ್ಪಲು’, ಮಳೆ’, ಕಾಡು’, ಹಳ್ಳ ಈ ಪದಗಳಿನ್ನು ಅವನ ಮನಸ್ಸಲ್ಲಿ ಜೀವಂತಿಕೆಯನ್ನ ಉಳಿಸಿಕೊಂಡಿದ್ದವು, ಜೀವಂತಿಕೆಯನ್ನ ತರಿಸುತ್ತಿದ್ದವು. ನಾಯಿ ನರಿಗಳ ಹಾಗೆ ಉಂಡು ಮಲಗಿ, ಸ್ರವಿಸಿ, ಸುಖಿಸಿ, ಹುಟ್ಟಿಸಿದವಗಳಿಗೂ ಉಣಿಸುತ್ತಲೇ ಸಮಯ ದೂಡುವುದನ್ನ ವಿಕಾಸ ಮನುಷ್ಯನಿಗೆ ಒದಗಿಸಿಲ್ಲ’, ಎಂದುಕೊಳ್ಳುತ್ತಾ ನಗುತ್ತಾನೆ.