Thursday, October 2, 2025

ಪಲಾಯನ

ಸಂಜೆ ಸುಮಾರು 6:30ರ ಸಮಯ. ಕತ್ತಲು ಬೇಗನೆ ಕವಿದಿತ್ತು‌. ಮನೆಯಲ್ಲೆಲ್ಲೂ ದೀಪ ಹಚ್ಚಿರಲಿಲ್ಲ. ನಿಧಾನ ಕಣ್ಣು ತೆರೆದ ಸದಾನಂದನಿಗೆ ಎಲ್ಲವೂ ಈ ನಿದ್ರೆಯ ಕನಸಾಗಿರಲಿಲ್ಲವೇ ಎನ್ನುವ ಸಂಶಯವಂತೂ ಸುಳಿಯಿತು. ಕಣ್ಮಿಟುಕಿಸಿದಂತೆ ಒಡನೆಯೆ ಪ್ರಜ್ಞೆ ಗೋಚರಿಸಿತು‌. ಆಗ್ಗಿಂದ ಕನಸಲ್ಲೋ ಅಥವಾ ನಿಜವೋ ಯಾರೋ ಬಾಗಿಲು ಬಡಿದಂತಿತ್ತು‌. ಸಾಕಷ್ಟು ಬಾರಿ ಇವನಿಗೆ ಕನಸೋ ನನಸೋ ಎನ್ನುವ ರೀತಿಯಲ್ಲಿ ಘಟನೆಗಳು ಘಟಿಸಿದ್ದುಂಟು. ಒಂದೊಮ್ಮೆ ಬಚ್ಚಲ ಮನೆಯಲ್ಲಿ ಕೂತು ಉಚ್ಚೆ ಉಯ್ಯುವಂತೆ ಕನಸು ಬಿದ್ದಿತ್ತು. ಎಚ್ಚರವಾದಾಗ ಚಡ್ಡಿ ಚೂರು ಒದ್ದೆಯಾಗಿದ್ದು ನೋಡಿ, ತಾನು ಬಚ್ಚಲಲ್ಲಲ್ಲವೇ ಉಯ್ದಿದ್ದು ಎಂದು ಗಲಿಬಿಲಿಗೊಂಡಿದ್ದ. ಈಗಲೂ ಹಾಗೆಯೇ ಯಾಕಾಗಿರಬಾರದು ಅಂತೆನಿಸುತ್ತಿದ್ದಂತೆ ಬಾಗಿಲು ತಟ್ಟಿದ ಸದ್ದಾಯಿತು. 

Saturday, September 20, 2025

ಛಾಯೆ

ಆ ಸಂಜೆ ಮನೆಗೆ ಬರುವ ವೇಳೆಗೆ ಕೊಂಚ ಹೈರಾಣಾಗಿದ್ದ. ಒಂದು ಸರ್ಕಾರೀ ಶಾಲೆಯಲ್ಲಿ ಬೆಳಿಗ್ಗೆ ವಸ್ತು ಪ್ರದರ್ಶನಕ್ಕೆ ಹೋಗಬೇಕಿತ್ತು‌. ಅಂದೇ ಏಕೆ ಆಯೋಜಿಸಿದ್ದರು? ಆ ಶಾಲೆಯ ಎಸ್.ಡಿ.ಎಂ.ಸಿ ಯ ಅಧ್ಯಕ್ಷರಿಗೆ ಅಂದೇ ಆಗಬೇಕಿತ್ತು‌, ಹಾಗಾಗಿ. ವಸ್ತು ಪ್ರದರ್ಶನಕ್ಕೂ ಮುನ್ನ ಒಂದು ವೇದಿಕೆ ಕಾರ್ಯಕ್ರಮ. ಅಲ್ಲಿ ಈತ ಮಾತನಾಡಬೇಕಿತ್ತು. ಏನು ಮಾತಾಡೋದು? ಹಿಂದಿನ ದಿನ ಸಾಕಷ್ಟು ಯೋಚಿಸಿ ತಯಾರಿಸಿಕೊಂಡಿದ್ದೇನೋ ಹೌದು! ಆದರೆ, ಅದು ಹಳ್ಳಿ! ತನ್ನ ಮಾತು ರುಚಿಸುವುದೇ? ತನ್ನದೇ ಮೌಢ್ಯವೆಂಬಂತೆ ಕಂಡುಬಿಟ್ಟಲ್ಲಿ? ಆ ಎಸ್.ಡಿ.ಎಂ.ಸಿ ಯ ಅಧ್ಯಕ್ಷರು ವೈಚಾರಿಕರಂತೆ ಬಿಂಬಿತಗೊಂಡವರು. ಗ್ರಹಣದ ದಿನ  ಗ್ರಹಣದ ಕಥೆಗಳ, ಇತಿಹಾಸದ ಅಂತೆಯೇ ವೈಜ್ಞಾನಿಕ ಆಯಾಮಗಳನ್ನ ತಮ್ಮೂರಿನ ಜನರ ಮುಂದೆ ತೆರೆದಿಡುವುದು ಅವರ ಉದ್ದೇಶವಾಗಿತ್ತು. ಅವರು ಫುಕೋಕನ ದೊಡ್ಡ ಅಭಿಮಾನಿಯಂತೆ. ತೇಜಸ್ವಿಯನ್ನ ಅನುಕರಿಸಿದ್ದೂ ಹೌದಂತೆ. ಕಾರ್ಯಕ್ರಮವೆಲ್ಲಾ ಕಳೆದು ತಮ್ಮ 'ಸಹಜ ಕೃಷಿಯ' ಪ್ರಯೋಗವನ್ನ ತೋರಲಿಕ್ಕೆ ಈತನನ್ನ ತೋಟಕ್ಕೆ ಕರೆದೊಯ್ದಿದ್ದರು. ಈತನೂ ಫುಕೋಕಕನನ್ನ ಮೆಚ್ಚಿದ್ದವನೇ. ಪುಕೋಕನ‌ ಬಗ್ಗೆ ಮೊದಲಿಗೆ ತಿಳಿದದ್ದು ಅದೇ ತೇಜಸ್ವಿಯ 'ಸಹಜ ಕೃಷಿ'ಯಿಂದ. ಕಥೆಗಳಿಗೆ ಹೆಚ್ಚು ಮಾರಿಹೋಗುತ್ತಿದ್ದ ಈತ ಫುಕೋಕನದ್ದೇ ಸಹಜ ಕೃಷಿಯ ಬಗೆಗಿನ‌ ಪುಸ್ತಕ ಕೊಂಡು ತಂದಿದ್ದ. ಸಂಪೂರ್ಣವಾಗಿ ಓದಲಾಗಿರಲಿಲ್ಲ. ತಾನು ಓದಿದ್ದು, ಅದರ ಪ್ರತಿಬಿಂಬವೇ ತನ್ನ ಈ ತೋಟ ಎಂದು ಎಲ್ಲೆಂದರಲ್ಲಿ ಹುಚ್ಚಾಪಟ್ಟೆ ಬೆಳೆದಿದ್ದ ಕಳೆಗಳನ್ನು ತೋರಿಸುತ್ತಾ ಅವರು ನಗುತ್ತಿದ್ದರು. ಬರೇ ಕಥೆಗಳನ್ನ ಕೊಚ್ಚುತ್ತಾ ತಿರುಗುತ್ತಿದ್ದ ಈತ ಒಮ್ಮೆಯಾದರೂ ಈಗ ಮೌನಿಯಾಗಿದ್ದ. ಬ್ರೂನೋ, ಗೆಲಿಲಿಯೋರ ಕಥೆಯನ್ನ ಅಂತೆಯೇ ತಾನು ಕೇಳಿದ್ದ ಕೊಲಂಬಸ್ ನ ಗ್ರಹಣದ ಕಥೆಯನ್ನ ಮಕ್ಕಳಿಗೆ ಹೇಳುತ್ತಾ ಮೌಢ್ಯವನ್ನ ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳುವುದು ನಮ್ಮ ಕರ್ತವ್ಯವೆಂದು ಹೇಳಿದ್ದಕ್ಕೆಯೇ ಆ‌ ಅಧ್ಯಕ್ಷರು ಕಾರ್ಯಕ್ರಮದ ನಂತರ ಈತನೊಟ್ಟಿಗೆ ಆಪ್ತರಾಗಿದ್ದಲ್ಲವೇ?

Tuesday, September 2, 2025

ಜಾಲ

ಇದೇ ಅವನ ಊರು ಎಂದು ಹೇಳಲು ಆಗದು. ಯಾವ ಊರಿನ ಯಾವ ಜನಕ್ಕೂ ಹೊಂದಿಕೊಳ್ಳಲು‌ ಸೈ.‌ ಆದರೂ ಎಂದಿಗೂ ಹೊಂದಿಕೊಳ್ಳುವವನೇ ಹೊರತು, ಇತರರು ಹೊಂದಿಕೊಳ್ಳಲಿಕ್ಕಾಗಿ ಕಾದವನಲ್ಲ. ಆದರೆ ಯಾವುದೂ‌ ತನ್ನೂರಲ್ಲ.

Sunday, August 24, 2025

ಐರನೀಸ್

 ಇವಳ ಪ್ರಲಾಪ

ನಿಮ್ಮಪ್ಪನಿಗೆ ಬೇರೆ ಹೆಣ್ಣು ತಂದಿದ್ದರೆ ನಮಗೆ ಈ ಕಷ್ಟವಿರ್ತಿರಲಿಲ್ವೇನೋ! 


Monday, August 4, 2025

ಸ್ವ ಆ ಗತ

ಎಷ್ಟು ಹರಿತ, ಎಷ್ಟು ಗಟ್ಟಿ!
ಇವರೇ ಉದ್ಗರಿಸಿದವರು. 

Sunday, August 3, 2025

ಮೋಹಿ

ಮೌಲ್ಯಗಳೆಲ್ಲಾ ಬುರುಡೆಗಳು. ವಿಕಾಸ ನಮ್ಮೊಳಗೆ ತುರುಕಿಸಿಟ್ಟಿದ್ದು ಸ್ವಾರ್ಥ. ದೀರ್ಘಕಾಲಿಕವಾಗಿ, ಶಾಶ್ವತವಾಗಿಯೇ ಅಂದುಕೋ, ಹೇರಳವಾಗಿ ನನ್ನ ಗುರುತು ತಲತಲಾಂತರವಾಗಿ ಹರಿದು ಹೋಗಬೇಕೆನ್ನುವ ಸ್ವಾರ್ಥ. ಇದೋ ಕೇಳು ಜಕೋಬನ ಒಂದು ಕಥೆ. 

ಅಲೆ

ಆಗಷ್ಟೇ 'ಗಾಳಿಪಟ' ಸಿನೆಮಾ ಹೊರಬಂದಿತ್ತು. 'ಮಿಂಚಾಗಿ ನೀನು ಬರಲು..' ಹಾಡನ್ನ ಮನಸ್ಸು ಹೋದಲ್ಲೆಲ್ಲಾ ತಂತಾನೇ ಗುನುಗಿಕೊಳ್ತಿತ್ತು‌. ಇದು ನಯನಾ, ನಯನಾ ಜಮದಗ್ನಿ ಮೇಲಿನ ಕಿಟ್ಟಿಯ ಮೋಹವನ್ನ ಇಮ್ಮಡಿಗೊಳಿಸಿತ್ತು. ಟ್ಯೂಷನ್ನಿನ ಮೆಟ್ಟಿಲುಗಳ ಮೇಲೆ ಕುಳಿತು ಓರೆಗಣ್ಣಿನಿಂದ ಆಕೆ ತನ್ನನ್ನೇ ನೋಡುವಳೆಂದು ಆತ ನೆನೆಸಿದ್ದೆಲ್ಲಾ ಅಕ್ಷರಶಃ ಸತ್ಯವೇ. ಟಿ.ಬಿ. ಸರ್ಕಲ್ಲಿನಲ್ಲಿ ಒಂದೇ ಆಟೋ ಹತ್ತಿದಾಗಿನಿಂದ, ಮಾತು ಕತೆಯೇ ಇಲ್ಲದೇ, ಆಟೋದಲ್ಲಿ ಹಾಕಿದ ಹಾಡುಗಳಿಗೆ ಮನಸ್ಸನ್ನ ಕೊಟ್ಟು, ಹೊರಗೆ ನೋಡುತ್ತಾ, ಆಕೆ ತನ್ನನ್ನೇ ನೋಡುತ್ತಿದ್ದಾಳೆಂದು ಕಿಟ್ಟಿ, ಹಾಗೆಯೇ ಕಿಟ್ಟಿ ತನ್ನನ್ನ ಎಂದು‌ ಇಬ್ಬರೂ ಊಹಿಸುತ್ತಾ ಗಾಳಿಗೆ ಕೂದಲು ಕೆದರಿಸಿಕೊಳ್ಳುತ್ತಾ, ಸರಿ ಮಾಡಿಕೊಳ್ಳುವ ನೆವದಿಂದ ಒಬ್ಬರನ್ನೊಬ್ಬರು ನೋಡುವ ಪ್ರಯತ್ನ ಇಬ್ಬರಿಗೂ ಪದೇ ಪದೇ ಬೇಕೆನಿಸುವ ಮತ್ತಿನಂತಾಗಿತ್ತು. ಒಮ್ಮೊಮ್ಮೆ ಮತ್ತೊಬ್ಬ ಜನ ಬಂದಾಗ ಸ್ವಲ್ಪ ಒಳಗೆ ಒತ್ತಾಗಿ ಕೂರಬೇಕಾಗಿ ಬಂದ ಸಂದರ್ಭ, ಕಿಟ್ಟಿಯ ಮನಸ್ಸು ಧಸ್ಸೆಂದು ಕುಸಿದೇ ಹೋಗುತ್ತಿತ್ತು‌. ಸೋಕಿದ ಮೈಗೆ, ಗಾಳಿಗೆ ಕೆದರಿ ಮುಖದ ಮೇಲೆ ಹಾರುತ್ತಿದ್ದ ಕೂದಲಿಗೆ, ಆಕೆಯ ದೇಹದ ವಾಸನೆಗೆ, ಕಿಟ್ಟಿ ಎದೆಬಡಿತ ನಿಂತೂ ನಿಂತೂ ಹೊಡೆದಂತೆ ಭಾಸವಾಗುತ್ತಿತ್ತು‌. ಒಮ್ಮೊಮ್ಮೆ ಚಿಲ್ಲರೆ ಇಲ್ಲದಿದ್ದಾಗ ಆಕೆಯದ್ದೂ ಸೇರಿ ಕಿಟ್ಟಿ ಕೊಡುವಾಗ ಆತನೂ ಆಕೆಯನ್ನ ನೋಡುತ್ತಿರಲಿಲ್ಲ, ಅವಳೂ ಸಹ. ಒಂದು 'ಥ್ಯಾಂಕ್ಯೂ' ಸಹ ಇಲ್ಲ. ಆದರೆ ವಾಪಾಸು ಹೊರಡುವಾಗ ಆತನದ್ದೂ ಸೇರಿ ಕೊಡುವ ಸರದಿ ಆಕೆಯದ್ದಾಗಿರುತ್ತಿತ್ತು‌. ಅದ್ಕಾಗಿಯೇ ಆಕೆಯೇ ಮೊದಲು ಇಳಿಯುವ ಹಾಗೆ ಕೂರ್ತಿದ್ದಳು. ಇಷ್ಟೆಲ್ಲಾ ವ್ಯವಹಾರಗಳೂ ಮೂಕೀ ಪರದೆಯಲ್ಲೇ, ಕತ್ತಲಲ್ಲೇ ನಡೆಯುತ್ತಿದ್ದದ್ದು. ಮಾತಿಲ್ಲ ಕತೆಯಿಲ್ಲ ನೋಟದ ವಿನಿಮಯಗಳೂ ಇಲ್ಲ. 

Friday, March 28, 2025

ಖಜಾನೆ ಬರಿದಾಗುವ ಹೊತ್ತಲ್ಲಿ

ಆಪ್ತನ ಸಲಹೆಗೆ ಮೆಚ್ಚಿ ರಾಜ ಜಕೋಬ ತಲೆದೂಗಿದ. 'ಈ ರೀತಿಯೆಲ್ಲಾ ಯೋಚಿಸಲು ಒಬ್ಬ ಸಾಮಾನ್ಯನಿಗೆ ಸ್ವಪ್ನಕ್ಕೂ ಅಸಾಧ್ಯ. ನೀನೊಬ್ಬ ಹುಟ್ಟು ಪ್ರತಿಭೆ'. 

 

ಡಂಗೂರ ಸಾರಲಾಯಿತು: 

"ಎಲ್ಲರಿಗೂ ಅತ್ಯದ್ಭುತ ಅವಕಾಶ. ನಿಮ್ಮ ಎಷ್ಟೇ ತಲಮಾರಿನ ಹಿಂದಿನವರನ್ನ ಉಸಿರಾಡಿಸಲು ಸುವರ್ಣಾವಕಾಶ. ಒಂದೊಂದು ಸಮಾಧಿಗೂ, ಹೆಣದ ತಲಮಾರಿನಾಧಾರ ನಿಗದಿಪಡಿಸಿದ ಕಾಸು ತೆತ್ತರಷ್ಟೇ ಸಾಕು".